ತಾಯಿ-ಮಗು

ಹರಕಲು ಊಣ್ಣೆ ಬಟ್ಟೆ, ತಲೆಗೆ ಕುಲಾವಿ ಹಾಕಿದ ಪುಟ್ಟ ಮಗುವನ್ನು ಎತ್ತಿ ಕೊಂಡು “ರಂಗೋಲಿ ಬೇಕಾಮ್ಮಾ?” ಎಂದಳು. ರಂಗೋಲಿ ಖರೀದಿಸುವಾಗ ಮಗುವನ್ನು ನೋಡಿ ನನಗೆ ಕನಿಕರವಾಯಿತು. “ಮಗು ಊಟ ಮಾಡುತ್ತಾನಾ?” ಎಂದು ಕೇಳಿದೆ. “ಕೊಡಮ್ಮ ಎಂದು ಕೈ ಒಡ್ಡಿದಳು. ಮನೆಯಲ್ಲಿದ್ದ ಚಾಕೊಲೇಟು, ಜೊತೆಗೆ ಅನ್ನಕ್ಕೆ ಮೊಸರು ಹಾಕಿ, ಬೇಯಿಸಿದ ತರಕಾರಿ ಹಾಕಿ ಮಗುವಿಗೆ ತಿನ್ನಿಸು” ಎಂದೆ. “ನೀರು ಕೊಡಮ್ಮ” ಎಂದು ಕೈ‌ಒಡ್ಡಿದಳು. ಒಳಗಿಂದ ನೀರು ತರುವ ಹೊತ್ತಿಗೆ ಚಾಕೊಲೇಟೆ ತಿಂದು ಅವಳು ಮೊಸರನ್ನ ತಿನ್ನುತಿದ್ದಳು. “ಯಾಕೆ ಮಗುವಿಗೆ ತಿನ್ನಿಸಲಿಲ್ಲವೇ?” ಎಂದೆ. “ಅದಕ್ಕೆ ಬಾಯಲ್ಲಿ ಇಟ್ಟರೆ ಉಗುಳಿತು. ನಾನು ತಿಂದು ಮೊಲೆಯೂಡಿಸುವೆ” ಎಂದಳು. ಮಗು ರಂಗೋಲಿಯಲ್ಲಿ ಕೈಯಾಡಿಸಿ ಬೆರಳು ಚೀಪುತಿತ್ತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಳಿಗೆಬಟ್ಟಲ ತಿರುವುಗಳಲ್ಲಿ – ೧೧೨
Next post ಚಲುವಿ ಚಲುವಿ ಚಂಪಕ್ಕಾ

ಸಣ್ಣ ಕತೆ

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

cheap jordans|wholesale air max|wholesale jordans|wholesale jewelry|wholesale jerseys